10 ತಿಂಗಳ ಉಚಿತ ತೋಟಗಾರಿಕೆ(Agriculture) ತರಬೇತಿ — ಅರ್ಜಿ ಆಹ್ವಾನ.!
ಕರ್ನಾಟಕ ತೋಟಗಾರಿಕೆ ಇಲಾಖೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಆಸಕ್ತ ಯುವಕರಿಗೆ 2025-26ನೇ ಸಾಲಿನಲ್ಲಿ 10 ತಿಂಗಳ ಉಚಿತ ತೋಟಗಾರಿಕೆ(Agriculture) ತರಬೇತಿಗೆ ಅವಕಾಶ ನೀಡುತ್ತಿದೆ. ಈ ತರಬೇತಿ ಹೊಸೂರು ಕ್ಷೇತ್ರದ ಸಿದ್ದಾಪುರದಲ್ಲಿರುವ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ತರಬೇತಿ ವಿಶೇಷತೆಗಳು:
- ✅ 10 ತಿಂಗಳ ಉಚಿತ ತರಬೇತಿ
- ✅ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ
- ✅ ಪ್ರತಿ ತಿಂಗಳು ₹1,750 ಶಿಷ್ಯವೇತನ (DBT ಮೂಲಕ ನೇರ ಬ್ಯಾಂಕ್ ಖಾತೆಗೆ)
- ✅ ನುರಿತ ತಜ್ಞರಿಂದ ಪ್ರಾಯೋಗಿಕ ತರಬೇತಿ
- ✅ ಶೈಕ್ಷಣಿಕ ಕರ್ನಾಟಕ ಪ್ರವಾಸ (5 ದಿನ)
- ✅ ವಿವಿಧ ತೋಟಗಾರಿಕೆ ಕೇಂದ್ರಗಳಲ್ಲಿ ಪೂರಕ ತರಬೇತಿ
ತರಬೇತಿ ಪಡೆಯುವ ಮೂಲಕ ಸಿಗುವ ಅವಕಾಶಗಳು:
- ಸರಕಾರಿ ಉದ್ಯೋಗ – “ಗಾರ್ಡನರ್” ಹುದ್ದೆಗೆ ನೇರ ನೇಮಕಾತಿಗೆ ಅರ್ಹತೆ.
- ಸ್ವತಂತ್ರ ಉದ್ಯಮ – ಖಾಸಗಿ ನರ್ಸರಿ ಸ್ಥಾಪನೆ, ಗೂಟಿ, ಕಸಿ, ಕಟ್ಟಿಂಗ್ ತಂತ್ರಗಳನ್ನು ಉಪಯೋಗಿಸಿ ಕೃಷಿ ಅಭಿವೃದ್ಧಿ.
- ಗುತ್ತಿಗೆ ಆಧಾರದ ಕೆಲಸ – ತೋಟಗಾರಿಕೆ ಕ್ಷೇತ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಅವಕಾಶ.
- ಖಾಸಗಿ ಉದ್ಯೋಗ – ಎಸ್ಟೇಟ್ಗಳಲ್ಲಿ ಅಥವಾ ನರ್ಸರಿಗಳಲ್ಲಿ ಮೇಲ್ವಿಚಾರಕರಾಗಿ ಕೆಲಸ.
ಅರ್ಹತಾ ಮಾನದಂಡಗಳು:
- ಅಭ್ಯರ್ಥಿಗಳು ಕೃಷಿಕ ಕುಟುಂಬದವರಾಗಿರಬೇಕು.
- ಕನಿಷ್ಠ SSLC ಉತ್ತೀರ್ಣರಾಗಿರಬೇಕು.
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ವಯೋಮಿತಿಯು 18ರಿಂದ 30 ವರ್ಷವರೆಗೆ.
- ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ: 33 ವರ್ಷ
- ಮಾಜಿ ಸೈನಿಕರಿಗೆ: 33 ರಿಂದ 65 ವರ್ಷವರೆಗೆ ರಿಯಾಯಿತಿ
ಅರ್ಜಿಯ ಮಾಹಿತಿ:
- ಅರ್ಜಿಯ ಅಂತಿಮ ದಿನಾಂಕ: ಶೀಘ್ರವೇ ಪ್ರಕಟವಾಗಲಿದೆ
- ಅರ್ಜಿಸುವ ವಿಧಾನ: ಹತ್ತಿರದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ಹೊಸೂರು ತರಬೇತಿ ಕೇಂದ್ರ, ಸಿದ್ದಾಪುರ ಸಂಪರ್ಕಿಸಿ.
- ಸಂಪರ್ಕ ಸಂಖ್ಯೆ: 9611227478 / 8971956318
- ಹೆಚ್ಚಿನ ಮಾಹಿತಿಗೆ: ತೋಟಗಾರಿಕೆ ಇಲಾಖೆ ಅಧಿಕೃತ ವೆಬ್ಸೈಟ್
ಸಲಹೆ:
ಈ ತರಬೇತಿಯನ್ನು 24 ವರ್ಷ ಮೇಲ್ಪಟ್ಟ ಅಥವಾ ಮುಂದಿನ ಶಿಕ್ಷಣಕ್ಕೆ ಅವಕಾಶವಿಲ್ಲದ ಅಭ್ಯರ್ಥಿಗಳು ಆರಿಸಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸದಲ್ಲಿರುವವರು ತಮ್ಮ ಓದಿನತ್ತ ಗಮನ ಹರಿಸುವುದು ಉತ್ತಮ.
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿರಿ