Subsidy ಹನಿ ನೀರಾವರಿ ವ್ಯವಸ್ಥೆಗೆ ಶೇ.90 ರಷ್ಟು ಸಹಾಯಧನ.!
ತೋಟಗಾರಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಲು ಉತ್ಸುಕ ರೈತರಿಗೆ ಈಗ ದೊಡ್ಡ ಅವಕಾಶ ಒದಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಇಲಾಖೆ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದು, ರೈತರು ಶೇ.90ರಷ್ಟುವರೆಗೆ ಸಹಾಯಧನ(Subsidy) ಪಡೆಯುವ ಅವಕಾಶವಿದೆ.
ಯಾರು ಅರ್ಜಿ ಹಾಕಬಹುದು.?
ಸಾಮಾನ್ಯ ವರ್ಗದ ರೈತರು ಮಾತ್ರವಲ್ಲದೆ, ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST)ದ ರೈತರಿಗೂ ಈ ಯೋಜನೆಯ ಲಾಭ ಸಿಗುತ್ತದೆ. ಅರ್ಜಿ ಸಲ್ಲಿಸಲು ರೈತರು ತಮ್ಮ ಹೆಸರಿನಲ್ಲಿ ಜಮೀನು ಹೊಂದಿರಬೇಕು. SC/ST ರೈತರು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹೊಂದಿರಬೇಕಾಗಿದೆ.
ಹನಿ ನೀರಾವರಿ ಏನಿಗೆ.?
ಹಣ್ಣು, ತರಕಾರಿ, ಹೂವುಗಳು, ಪ್ಲಾಂಟೇಶನ್ ಬೆಳೆಗಳು, ಔಷಧಿ ಮತ್ತು ಸುಗಂಧ ಸಸ್ಯಗಳಿಗೆ ಹನಿ ನೀರಾವರಿ ಸೂಕ್ತವಾಗಿದೆ. ಬೆಳೆ ಮತ್ತು ಅವುಗಳ ಅಂತರದ ಆಧಾರದಲ್ಲಿ ಸಹಾಯಧನದ ಪ್ರಮಾಣ ನಿಗದಿಯಾಗುತ್ತದೆ.
ಸಹಾಯಧನದ ವಿವರ:
- SC/ST ರೈತರಿಗೆ: ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ಶೇ.90 ರಷ್ಟು ಸಹಾಯಧನ.
- ಇತರೆ ರೈತರಿಗೆ: ಇದೇ ವ್ಯಾಪ್ತಿಗೆ ಶೇ.75 ರಷ್ಟು ಸಹಾಯಧನ.
- 2 ರಿಂದ 5 ಹೆಕ್ಟೇರ್ ವರೆಗೆ: ಎಲ್ಲಾ ವರ್ಗದ ರೈತರಿಗೆ ಶೇ.45 ರಷ್ಟು ಸಹಾಯಧನ.
- ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗಳು: ಗರಿಷ್ಠ 2 ಹೆಕ್ಟೇರ್ ವರೆಗೆ ಮಾತ್ರ ಸಹಾಯಧನ.
- ಒಬ್ಬ ಫಲಾನುಭವಿಗೆ ಗರಿಷ್ಠ ಮಿತಿ: 5 ಹೆಕ್ಟೇರ್.
ಯೋಜನೆ ಜಾರಿಗೆ ಸ್ಥಳಗಳು:
ಈ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಇಲ್ಲಿ ತೋಟಗಾರಿಕೆ ಇಲಾಖೆಯ ಮಾನ್ಯ ಕಂಪನಿಗಳ ಮೂಲಕ ಅಳವಡಿಕೆಗೆ ಅವಕಾಶವಿದೆ.
ಹೇಗೆ ಅರ್ಜಿ ಹಾಕಬೇಕು.?
ಹನಿ ನೀರಾವರಿ ಅಳವಡಿಸಲು ಇಚ್ಛಿಸುವ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆದು ಸಲ್ಲಿಸಬಹುದು. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವುದು ಸೂಕ್ತ.
ಮೂಲ ಉದ್ದೇಶ: ಕೃಷಿಗೆ ನೀರಾವರಿ ಸುಲಭವಾಗಿಸಿ ಉತ್ಪಾದಕತೆ ಹೆಚ್ಚಿಸುವುದೇ ಈ ಯೋಜನೆಯ ಪ್ರಮುಖ ಗುರಿ.